ನಮ್ಮ ತಲೆಮಾರಿನ ಯುವಕರಲ್ಲಿ ಸಾಮಾಜಿಕ ಬದ್ದತೆಯನ್ನು ಕಾರ್ಯಗತ ಮಾಡಲು ಹೆಣಗುತ್ತಿರುವ ಕೆಲವೇ ಕೆಲವರಲ್ಲಿ ಪ್ರಶಾಂತ್ ಕೂಡ ಒಬ್ಬರು. ನಾನು ಪ್ರಶಾಂತ್ರನ್ನು ಮೊದಲ ಬಾರಿಗೆ ನೋಡಿದ್ದು 1998 ರಲ್ಲಿ ಕುವೆಂಪು ಯುನಿವರ್ಸಿಟಿಯ ಆವರಣದಲ್ಲಿ. ಅಲ್ಲಿಗೆ ತಮ್ಮ ಎಂಫಿಲ್ ಪದವಿಗಾಗಿ ಅಲೆಯುತ್ತಿದ್ದ ಪ್ರಶಾಂತ್ ಪರಿಚಯವಾದಾಗ ಕರ್ನಾಟಕದ ಜನಸಮುದಾಯಗಳ ಬಗ್ಗೆ ಸಮಗ್ರವಾದ ಚಿತ್ರಣವನ್ನು ಕಲೆಹಾಕಲು ಪ್ರಯತ್ನಿಸುತ್ತಿದ್ದರು. ಕರ್ನಾಟಕದಲ್ಲಿರುವ ಎಲ್ಲ ಜಾತಿಗಳು ಮತ್ತು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ರೀತಿ ನೀತಿಗಳ ಬಗ್ಗೆ ಅವರು ನಡೆಸುತ್ತಿದ್ದ ಸಂಶೋದನೆ ಹಾಗು ಕಲೆ ಹಾಕುತ್ತಿದ್ದ ವಿವರಗಳನ್ನು [...]